ಇದೀಗ ಬಂದ ಸುದ್ದಿ !! ಇಂದು ಬೆಳಿಗ್ಗೆ ಎಂದಿನಂತೆ ಕಾರ್ಮಿಕರನೊತ್ತು ಕೆಲಸಕ್ಕೆ ಹೊರಟಿದ್ದ ವಾಹನ ದುರಂತಕ್ಕೀಡಾಗಿದೆ

0

ಟಾಟಾ ಏಸ್ (#tataacemega) ರಸ್ತೆ ಅಪಘಾತದಲ್ಲಿ 14ರಿಂದ15 ಜನರಿಗೆ ಗಾಯಗಳಾಗಿವೆ ಎನ್ನಲಾಗಿದೆ , ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕುಡುಗರಳ್ಳಿಯ ಜನ ಹೆಬ್ಸಾಲೆ ತಿರುವಿನ ಬಳಿ ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು , ವಾಹನದಲ್ಲಿದ್ದ ಎಲ್ಲರಿಗು ಗಾಯಗಳಾಗಿದೆ

ಸ್ಥಳೀಯರ ಸಹಾಯದಿ , ಇಲ್ಲಿಂದ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ 11 ಮಂದಿ ಗಾಯಾಳುಗಳ ಸಾಗಿಸಿ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಿದ್ದು . ಅದೃಷವಶಾತ್ ಯಾವುದೇ ಸಾವು ಆಗದಿರೋದು ಸಮಾಧಾನಕರ ವಿಷಯ . ಘಟನೆಗೆ ಹೆಬ್ಸಾಲೆ ತಿರುವಿನ ಬಳಿ ಗೂಡ್ಸ್ ವಾಹನದಲ್ಲಿ ಕುರಿ ಮಂದಿಗಳ ತುಂಬಿದಂತೆ ಹಿಂಡನ್ನು ಹೊತ್ತ ಚಾಲಕ , ದೊಡ್ಡ ತಿರುವಿನ ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ನಡೆದಿದೆ ಎನ್ನಲಾಗಿದೆ . ಯಥೇಚ್ಛವಾಗಿ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಹೊತ್ತು ಸಾಗೋದು ಇತ್ತ ಮಲೆನಾಡಿನಲ್ಲಿ ಸರ್ವೇ ಸಾಮಾನ್ಯ , ಆದರೆ ಇದು ಅಪಾಯಕಾರಿ ಕೂಡ ಹೌದು !!

LEAVE A REPLY

Please enter your comment!
Please enter your name here