ಬೈಕನ್ನು ಗುದ್ದಿದಲ್ಲದೆ ನೂರು ಮೀಟರ್ ಎಳೆದೊಯ್ದ ಘಟನೆ : ಬೈಕ್ ಸವಾರನ ಕೈ ಮುರಿತ ( ಮತ್ತೊಂದು ಅಪಘಾತ ವರದಿ ಹಾಸನ )
ಹಾಸನ/ಚನ್ನರಾಯಪಟ್ಟಣ : ದಿನಾಂಕ 9 ಜುಲೈ 2022 ಶನಿವಾರ ಸಂಜೆ ಸುಮಾರು 4.45ರ ಹೊತ್ತಿಗೆ , ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬರಗೂರು ಬಳಿ ( Bangalore to Hassan NH-75
Bargur hand post chanarayapatna) ಸ್ಥಳೀಯರ ಪ್ರಕಾರ ಬೊಲೆರೊ ವಾಹನ ಚಾಲಕ ಕುಡಿದ ಮತ್ತಿನಲ್ಲಿ ಮಳೆಯ ನಡುವೆ ಪಲ್ಸರ್ ಬೈಕಿಗೆ ಹಿಂಬದಿಯಿಂದ ಗುದ್ದು ,
![](https://hassananews.com/wp-content/uploads/2022/07/InShot_20220709_173732186.jpg)
![](https://hassananews.com/wp-content/uploads/2022/07/InShot_20220709_173812686.jpg)
![](https://hassananews.com/wp-content/uploads/2022/07/InShot_20220709_173845014.jpg)
![](https://hassananews.com/wp-content/uploads/2022/07/InShot_20220709_173921477.jpg)
ಬೊಲೆರೊ ಚಾಲಕನ ನಿಯಂತ್ರಣಕ್ಕೆ ಸಿಗದೆ ಇನ್ನು ನೂರು ಮೀ. ದೂರ ಎಳೆದೊಯ್ದ ಘಟನೆ ನಡೆದಿದೆ . ಈ ರಸ್ತೆ ಅಪಘಾತದಲ್ಲಿ ಮುದ್ದನಹಳ್ಳಿ ಗ್ರಾಮದ ಯುವಕನ ಕೈ ಮೂಳೆ ಮುರಿದಿದೆ ಎನ್ನಲಾಗಿದೆ . (ಆಂಬುಲೆನ್ಸ್ ನಲ್ಲಿ ಯುವಕನನ್ನು ಆಸ್ಪತ್ರೆ ಗೆ ಕರೆದೊಯ್ಯಲಾಗಿದೆ )
ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ತನಿಖೆ ನಂತರವಷ್ಟೇ ಇನ್ನಷ್ಟು ಮಾಹಿತಿ ನಿರೀಕ್ಷಿಸಬಹುದಾಗಿದೆ.