ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ
ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿ ಕ್ರೌರ್ಯ , 55 ಜನರ(45ಪುರುಷರು , 10ಮಹಿಳೆಯರು) ನ್ನು ಒಂದೆಡೆ ಬಂಧನದಲ್ಲಿಟ್ಟಿದ್ದ ಸಾಹುಕಾರ , ಅಕ್ರಮ ಬಂಧನದಲ್ಲಿಟ್ಟು ಬಲವಂತದ ದುಡಿಮೆ ಮಾಡಿಸಿಕೊಳ್ಳುತ್ತಿದ್ದ ಆರೋಪದ ಮೇಲೆ ಮುನೀಶ್ ಎಂಬಾತನ ಬಂಧಿಸಲು ಕರೆ ನೀಡಿದ್ದಾರೆ , ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಅಣ್ಣೇನಹಳ್ಳಿ ಗ್ರಾಮದಲ್ಲಿ ಘಟನೆ , ಏಪ್ರಿಲ್ 5ರ ಬೆಳಗ್ಗೆ ದಾಳಿ ಮಾಡಿದ ಅರಸೀಕೆರೆ ಗ್ರಾಮಾಂತರ ಪೊಲೀಸರು , ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಸಿಬ್ಬಂದಿ ಗಳು ಕೂಡಿ 55 ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಬಂಧಮುಕ್ತಗೊಳಿಸಿದ ಪೊಲೀಸರು
![](https://hassananews.com/wp-content/uploads/2022/04/IMG_20220406_083933.jpg)
ಅರಸೀಕೆರೆ ಗ್ರಾಮಾಂತರ ಸಿಪಿಐ ವಸಂತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಮೊದಲು ನಡೆದಿದ್ದು , ನೀವು ಕಾಣುತ್ತಿರು ಭಾವ ಚಿತ್ರಗಳ ಎರಡು ಪ್ರತ್ಯೇಕ ಶೆಡ್ಗಳಲ್ಲಿ ಬಂಧಿಸಿಟ್ಟಿದ್ದ ಮುನೇಶ್
![](https://hassananews.com/wp-content/uploads/2022/04/136be9_371923_9_P_1_mr.jpg)
ಈ ಮುನೇಶ್ ಇವರನ್ನು ಇಟ್ಟುಕೊಂಡು ಮಾಡಿಸುತ್ತಿದ್ದ ಕೆಲಸ ಏನು :
ಚಿಕ್ಕಮಗಳೂರು, ದಾವಣೆಗೆರೆ, ಹುಬ್ಬಳ್ಳಿ, ಮಧುಗಿರಿ, ಪಾವಗಡ, ಮಂಡ್ಯ, ತಮಿಳುನಾಡು ಸೇರಿದಂತೆ ವಿವಿಧೆಡೆಗಳಿಂದ ಬಂದಿದ್ದ ಕಾರ್ಮಿಕ ರನ್ನು ಶುಂಠಿ ಕೆಲಸ , ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಮುನೇಶ್ , ಕೆಲಸ ಮುಗಿದ ಕೂಡಲೇ ಶೆಡ್ನಲ್ಲಿ ಎಲ್ಲರನ್ನೂ ಕೂಡಿ ಹಾಕುತ್ತಿದ್ದನಂತೆ , ಅವರಿಗೆ ಹೊರ ಹೋಗಲು ಬಿಡುತ್ತಿರಲಿಲ್ಲ.ಪಾಪ ಕೂಲಿ ಅರಸಿ ಹೊರ ಜಿಲ್ಲೆಗಳಿಂದ ಬಂದಿದ್ದ ಕಾರ್ಮಿಕರು
ಅವರನ್ನು ಅಕ್ರಮವಾಗಿ ದುಡಿಸಿಕೊಳ್ಳಲು ಮುನೇಶ್ ಜೊತೆಗೆ ಕುಮಾರ, ಲಕ್ಷ್ಮೀ, ಮನು ಎಂಬುವವರೂ ಕೈ ಜೋಡಿಸಿದ್ದು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ
![](https://hassananews.com/wp-content/uploads/2022/04/IMG_20220406_083958.jpg)
ಹಾಸನ SP ಶ್ರೀನಿವಾಸ್ಗೌಡ ಸೂಚನೆ ಮೇರೆಗೆ ದಾಳಿ ನಡೆಸಿದ DYSP ಅಶೋಕ್, ವಸಂತ್ಕುಮಾರ್ (ಸರ್ಕಲ್ ಇನ್ಸ್ಪೆಕ್ಟರ್ ), ಲಕ್ಷ್ಮಣ್ (SI) ನೇತೃತ್ವದ ತಂಡ ದಾಳಿ ಕಾರ್ಯಾಚರಣೆಯಲ್ಲಿ ಸಹಕರಿಸಿದ ಬೆಳಗುಂಬ ಗ್ರಾಮ ಪಂಚಾಯಿತಿ ಗ್ರಾಮಸ್ಥರು
” ಕಾರ್ಮಿಕರನ್ನು ಶುಂಠಿ ಕೆಲಸಕ್ಕೆಂದು ಕರೆ ತಂದು ಬೇರೆ ಬೇರೆ ಕೆಲಸಕ್ಕೆ ದುಡಿಸಿಕೊಳ್ಳಲಾಗಿದೆ. ಕೆಲವರು ಎರಡು ವರ್ಷ, ಕೆಲವರು ಆರು ತಿಂಗಳು, ಇನ್ನೂ ಕೆಲವರು ವಾರಗಳಿಂದ ಬಂಧಿಯಾಗಿದ್ದರು. ಹಲವರು ಎಷ್ಟೋ ದಿನಗಳಿಂದ ಸ್ನಾನವನ್ನೂ ಮಾಡದೆ, ಕೊಳಕು ಬಟ್ಟೆಯಲ್ಲೇ ಉಸಿರುಗಟ್ಟುವ ವಾತಾವರಣದಲ್ಲಿ ದಿನದೂಡುತ್ತಿದ್ದರು ” – ನಂದಿನಿ ( additional HASSAN SP)
![](https://hassananews.com/wp-content/uploads/2022/04/FB_IMG_1649215898681.jpg)
ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಧನ್ಯವಾದಗಳು ಹೇಳಲೇ ಬೇಕು
crimedairyhassan stopserfdom