” ಮಂಗಳೂರು-ಬೆಂಗಳೂರು ಮದ್ಯೆ ಚಲಿಸುವ ರೈಲಿಗೆ
ಸದ್ಯದಲ್ಲೇ ವಿಸ್ಟಾಡೋಮ್ (ಗಾಜಿನ ಚಾವಣಿ) ಅಳವಡಿಸಲಾಗುವುದು ” -ಪಿ.ಸಿ ಮೋಹನ್(ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸಂಸದ) (ಟ್ವೀಟ್)
![](https://hassananews.com/wp-content/uploads/2021/02/PicsArt_02-12-10.51.51-1024x1024.jpg)
•ಪ್ರಾಕೃತಿಕ ಸೌಂದರ್ಯದ ನಡುವೆ ಹಾದು ಹೋಗುವ ಬೆಂಗಳೂರು-ಮಂಗಳೂರು ರೈಲಿನ ಬೋಗಿಗೆ ಗಾಜಿನ ಚಾವಣಿ ಅಳವಡಿಸಿದರೆ ,
![](https://hassananews.com/wp-content/uploads/2021/02/20210212_105058-1.jpg)
ಪಶ್ಚಿಮ ಘಟ್ಟವನ್ನು ಪಸರಿಸಿಕೊಂಡು ಹೋಗುವ ಈ ರಮಣೀಯ ಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರರ್ಯವನ್ನು ರೈಲಿನೊಳಗೆ ಕುಳಿತು ಆಹಗಲಾದಿಸುವ ಭಾಗ್ಯ ಸಿಗಲಿದೆ.
![](https://hassananews.com/wp-content/uploads/2021/02/20210212_105056.jpg)
ಈ ಬೋಗಿ ಆಳವಡಿಸಿದ್ದೇ ಆದಲ್ಲಿ, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣದ ವರೆಗಿನ ಸುಮಾರು 55 ಕಿ.ಮಿ ಉದ್ದದ ಹಚ್ಚ ಹಸಿರಿನಿಂದ ಕೂಡಿದ ಅರಣ್ಯ, ಜಲಪಾತ, ಸೇತುವೆಗಳ ಪ್ರಕೃತಿ ರೋಚಕ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು.
![](https://hassananews.com/wp-content/uploads/2021/02/20210212_105051.jpg)
ವಿಸ್ಟಾಡೋಮ್ ಕೋಚ್ ಅನ್ನು ಹಾಲಿ ಇರುವ ಎಂಜಿನ್ಗೆ ಅಳವಡಿಸಲಾಗುತ್ತದೆ. ಒಂದು ಬೋಗಿಯಲ್ಲಿ 40 ಒರಗಿಕೊಳ್ಳುವ ಆಸನಗಳಿದ್ದು, ಇವುಗಳು 360° ಡಿಗ್ರಿಯಲ್ಲಿ ಸುತ್ತುತ್ತವೆ. ಇದರಲ್ಲಿ GPS ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವೆನ್, ಸಣ್ಣ ಫ್ರಿಡ್ಜ್, ಎ.ಸಿ ಸೌಲಭ್ಯ ಇರಲಿದೆ. , ಎನ್ನಲಾಗಿದೆ.
![](https://hassananews.com/wp-content/uploads/2021/02/20210212_105054.jpg)
ಸಂದರ್ಭಿಕ ಚಿತ್ರ: