ಹಾಸನ / ಅರಕಲಗೂಡು :ಅಕ್ರಮ ಸಂಬಂಧ ಹೊಂದಿದ್ದರೆಂಬ ಕಾರಣಕ್ಕೆ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ 6ನೇ ಹೊಸಕೋಟೆ ಗ್ರಾಮದ ಹರೀಶ್ (36)
ಎಂಬುವವರನ್ನು ಮಾಗಡಿ ತಾಲ್ಲೂಕು ದೊಡ್ಡಸೋಮನಹಳ್ಳಿಯ ಸುಷ್ಮಿತಾ, ಬೆಂಗಳೂರು ರಾಜಾಜಿನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ದೇವಸ್ಥಾನಕ್ಕೆ ಬಂದಿರುವುದಾಗಿ ಹೇಳಿ ಮಂಗಳವಾರ ಬಸ್ ನಿಲ್ದಾಣದ ಮುಂಭಾಗದ ಲಾಡ್ಜ್ನಲ್ಲಿ ಕೊಠಡಿಯನ್ನು ಪಡೆದಿದ್ದರು. ನಂತರ 6ನೇ ಹೊಸಕೋಟೆ ಗ್ರಾಮದ ದಿಲೀಪ್ಕುಮಾರ್, ಹರೀಶ್, ಲಕ್ಷ್ಮಣ್ ಅಲ್ಲಿಗೆ ಬಂದಿದ್ದರು. ನಂತರ ಶೌಚಗೃಹದಲ್ಲಿ ಹರೀಶ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಯ , ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಲಾಡ್ಜ್ನಲ್ಲಿ ಮೊನ್ನೆ ಮಂಗಳವಾರ ಮಚ್ಚು ಮತ್ತು ಚಾಕು ಚಳಪಿಸಿದ ಘಟನೆ ನಡೆದಿದೆ
ಕೊಲೆ ಆರೋಪಿ ಸಿಕ್ಕಿ ಬಿದ್ದಿದ್ದು , ಕೊಲೆಯಾದವನ ಗ್ರಾಮದವನೇ ಆಗಿದ್ದು ಹೆಸರು ಲಕ್ಷ್ಮಣ (28) ಎಂಬುವವನನ್ನು ಅದೇ ಲಾಡ್ಜ್ನಲ್ಲಿ ರೆಡ್ ಹ್ಯಾಂಡ್ ಆಗಿ ಬಂಧಿಸಿ ಪೊಲೀಸರು, ತನ್ನ ಸಂಬಂಧಿ ಮಹಿಳೆಯೊಂದಿಗೆ ಕೊಲೆಯಾದ ಹರೀಶ್ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ಸಂಚು ರೂಪಿಸಿ ಕೊಲೆ ಮಾಡಿರುವುದಾಗಿ ಆರೋಪಿ ಲಕ್ಷ್ಮಣ್ ಹೇಳಿಕೆ ನೀಡಿದ್ದು, ಈ ಕೊಲೆಗೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳು ಎನ್ನಲಾದ : ಸುಷ್ಮಿತಾ ಮತ್ತು ದಿಲೀಪ್ ಕುಮಾರ್ ಬಂಧನಕ್ಕೆ ತಂಡ ರಚಿಸಿದೆ…
ಪ್ರಕರಣ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಠಾಣೆಯಲ್ಲಿ ದಾಖಲಾಗಿದೆ.
#crimedairyhassan