ಹಾಸನ / ಚನ್ನರಾಯಪಟ್ಟಣ : ಪ್ರತಿವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯುತ್ತಿತ್ತು ಆದರೆ ಈ ವರ್ಷ ಸರ್ಕಾರ ರಥೋತ್ಸವವನ್ನು ನಿಷೇಧಿಸಿರುವ ಹಿನ್ನೆಲೆ : ಸಂಪ್ರದಾಯ ಬಿಡಬಾರದು ಎಂಬಂತೆ
![](https://hassananews.com/wp-content/uploads/2022/01/FB_IMG_1642645596812.jpg)
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯ 91ನೇ ವರ್ಷದ ಬ್ರಹ್ಮರಥೋತ್ಸವವು ಬುಧವಾರ ಕೆಲವೇ ಭಕ್ತರ ಸಮ್ಮುಖದಲ್ಲಿ 10 ಮೀಟರ್ ಮಾತ್ರ ರಥವನ್ನು ಎಳೆದು ಸರಳವಾಗಿ ನಡೆಸಲಾಯಿತು
![](https://hassananews.com/wp-content/uploads/2022/01/FB_IMG_1642645599405.jpg)
ಸುಪ್ರಭಾತ, ದಿವ್ಯ ಅಲಂಕಾರ, ನಿತ್ಯಸೇವೆ, ಅಗ್ನಿ ಪ್ರತಿಷ್ಠೆ, ಕಳಶ ಪ್ರತಿಷ್ಠೆ , ಮಂಗಳ ವಾದ್ಯದೊಂದಿಗೆ, ಭಾವ ಭಕ್ತಿಯಿಂದ ರಥವನ್ನು ಬೆಳಿಗ್ಗೆ 9 ಗಂಟೆಗೆ ಎಳೆದರು. ರಥವು ಚಲಿಸುವಾಗ ಭಕ್ತರು ಬಾಳೆಹಣ್ಣು ಮತ್ತು
![](https://hassananews.com/wp-content/uploads/2022/01/FB_IMG_1642645601590.jpg)
ಧವನವನ್ನು ಎಸೆದು, ಜಾತ್ರೆಗೆ ಬಂದವರಿಗೆ ಉಪಹಾರ ನೀಡುವ ಮೂಲಕ ಕೆಲವು ಭಕ್ತರು ದೇವರಿಗೆ ಹರಕೆ ಸಲ್ಲಿಸಿದರು
![](https://hassananews.com/wp-content/uploads/2022/01/FB_IMG_1642645623494.jpg)
ಬೆಂಗಳೂರು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವ ಬೇಗ ಮುಗಿದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ತಾಲ್ಲೂಕು ಆಡಳಿತವು ಕೋವಿಡ್–19 ಹಿನ್ನೆಲೆಯಲ್ಲಿ ಇದೇ ತಿಂಗಳ 6ರಂದು ರದ್ದುಪಡಿಸಿರುವುದಾಗಿ ತಿಳಿಸಿತ್ತು.