20 ಟನ್ ಮೇಲ್ಪಟ್ಟ ಸಾಮಥ್ರ್ಯದ ಸರಕು ಸಾಗಾಣೆ ವಾಹನಗಳಿಗೆ ಅವಕಾಶ

0

ವಾಹನ ಸಂಚಾರಕ್ಕೆ ಅವಕಾಶ
ಹಾಸನ ಆ.23 : ರಾಷ್ಟ್ರೀಯ ಹೆದ್ದಾರಿ 75 ರ ಬೆಂಗಳೂರು- ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೋಣಿಗಾಲ್‍ವರೆಗಿನ ಭಾಗದಲ್ಲಿ ನಿರ್ಬಂಧಿಸಲಾಗಿದ್ದು, 20 ಟನ್ ಮೇಲ್ಪಟ್ಟ ಸಾಮಥ್ರ್ಯದ ಸರಕು ಸಾಗಾಣೆ ವಾಹನಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚರಿಸಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್.ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ.

ಕಾರುಗಳು, ಜೀಪು, ಟೆಂಪೋ, ಎಲ್.ಸಿ.ವಿ(ಮಿನಿ ವ್ಯಾನ್), ಹಾಗೂ ದ್ವಿಚಕ್ರ ವಾಹನಗಳು, ಆಂಬುಲೆನ್ಸ್, ಸಾರ್ವಜನಿಕರು ಸಂಚರಿಸುವ ಬಸ್‍ಗಳು, ರಾಜಹಂಸ, ಐರಾವತ, 20 ಟನ್ ಸಾಮಥ್ರ್ಯದ ಸರಕು ವಾಹನಗಳು ಹಾಗೂ 6 ಚಕ್ರದ ವಾಹನಗಳು ಸಂಚರಿಸಬಹುದಾದ ಲಘು ವಾಹನಗಳಾಗಿವೆ.

ಬಾರಿ ವಾಹನಗಳಾದ ಬುಲೆಟ್ ಟ್ಯಾಂಕರ್, ಶಿಫ್ಟ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಶಿಯಲ್ ವಾಹನಗಳು, ಮಲ್ಟಿ ಎಕ್ಸೆಲ್ ಟ್ರಕ್ ಟ್ರೈಲರ್ 20 ಟನ್ ಮೇಲ್ಪಟ್ಟ ಸಾಮಥ್ರ್ಯದ ಸರಕು ವಾಹನಗಳು ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳು ಸಂಚರಿಸಬಹುದಾಗಿದೆ.

ಪ್ರಸ್ತಾಪಿತ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಬಗ್ಗೆ ಅವಶ್ಯವಿರುವ ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಪೊಲೀಸ್ ಅಧೀಕ್ಷಕರು, ಅಧಿಕಾರವುಳ್ಳವರಾಗಿದ್ದು, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನರವರ ವರದಿಯಂತೆ ಈ ಅವಧಿಯಲ್ಲಿ ಸಿಂಗಲ್ ಲೈನ್‍ನಲ್ಲಿ ಮಾತ್ರ ವಾಹನ ಸಂಚರಿಸುವಂತೆ ನೋಡಿಕೊಳ್ಳತಕ್ಕದ್ದು,

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ವಾಹನ ನಿಯಂತ್ರಣ ಕಾರ್ಯದಲ್ಲಿ ಸೂಕ್ತ ಸಹಕಾರ ನೀಡಲು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here