ಸಾವೇ ನೀನೆಷ್ಟು ಕ್ರೂರಿ, ಉಳಿದಿದ್ದು ಮಾನವೀಯತೆ! ಅಪಘಾತದಲ್ಲಿ ಮೃತ ಯುವಕನ ಅಂಗದಾನ ; ಇನ್ನೊಂದು ದುರಂತವೆಂದರೆ, ಈ ಯುವಕ ಕೋವಿಡ್ ಸಂದರ್ಭ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದ
![](https://hassananews.com/wp-content/uploads/2023/08/WhatsApp-Image-2023-08-24-at-9.53.16-AM-1-798x1024.jpg)
ಹಾಸನ : ಅಪಘಾತದಲ್ಲಿ ಯುವಕನ ಸಾವಿನ ದುಃಖದ ನಡುವೆಯೂ ಮಾನವೀಯತೆ ಮೆರೆದ ಅವರ ಕುಟುಂಬ, ಅಂಗಾಂಗ ದಾನ ಮಾಡಿ ಸಾರ್ಥಕತೆ ಪಡೆದ ಘಟನೆ. , ಹಾಸನದಲ್ಲಿ ನಡೆದಿದೆ, ನಗರದ ವಿದ್ಯಾನಗರದಲ್ಲಿ ನಡೆದಿದ್ದ ಅಪಘಾತವೊಂದರಲ್ಲಿ ನಗರದ ಆಚಾರ್ಯ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಹರ್ಷಿಲ್ ಎನ್(16) ಎಂಬಾತ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದ. ಅಪಘಾತದಲ್ಲಿ ಹರ್ಷಿಲ್ ತಲೆಗೆ ತೀವ್ರ ಪೆಟ್ಟಾಗಿತ್ತು.
![](https://hassananews.com/wp-content/uploads/2023/08/WhatsApp-Image-2023-08-24-at-9.53.15-AM-816x1024.jpg)
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಸಹ. ಚಿಕಿತ್ಸೆ ಫಲಕಾರಿಯಾಗದೆ ಹರ್ಷಿಲ್ ಸಾವಿಗೀಡಾಗಿದ್ದನು. ಇನ್ನೊಂದು ಮನಕಲಕುವ ದುರಂತವೆಂದರೆ, ಈ ಯುವಕ ಕಳೆದ ಕೋವಿಡ್ ಸಂದರ್ಭ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದ. ನಂತರ ಈತ ತನ್ನ ಅಜ್ಜಿಯ ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ಹರ್ಷಿಲ್ ತಂದೆ ತಾಯಿ ಸಾವಿನಿಂದ ಅದಾಗಲೇ ಮನನೊಂದಿರುವ ಕುಟುಂಬಕ್ಕೆ, ಹರ್ಷಿಲ್ ಸಾವಿ ಬರ ಸಿಡಿಲಿನಂತೆ ಬಡಿದಿದೆ.
![](https://hassananews.com/wp-content/uploads/2023/08/WhatsApp-Image-2023-08-24-at-9.53.15-AM-1-1024x762.jpg)
ಈ ದುಃಖದ ನಡುವೆಯೂ ಮಾನವೀಯತೆ ಮೆರೆದರು. ಹಾಸನದ ಸಾರ್ವಜನಿಕ ವಲಯದಲ್ಲಿ ಇದೀಗ ಪ್ರಶಂಸನೆ ವ್ಯಕ್ತವಾಗಿದೆ, ಅಂಗಾಂಗ ದಾನ ಮಾಡುವ ಮೂಲಕ ಸಾವಿಗೆ ಸಾರ್ಥಕತೆ ತಂದರು. ದೇವರು ಮೃತ ಮೂವರಿಗೆ ಶಾಂತಿ ಲಭಿಸುವಂತಾಗಲಿ, ಕುಟುಂಬಕ್ಕೆ ದುಂಖ ಭರಿಸುವ ಶಕ್ತಿ ದೊರಕಲಿ..
![](https://hassananews.com/wp-content/uploads/2023/08/WhatsApp-Image-2023-08-24-at-9.53.16-AM-873x1024.jpg)