ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಹಾಸನ ಆಗಸ್ಟ್ 24 (ಕರ್ನಾಟಕ ವಾರ್ತೆ):- ಕವಿಪ್ರನಿನಿಯಿಂದ ಹಾಸನ ಸಂತೆಪೇಟೆ 66/11ಕೆ.ವಿ ವಿ.ವಿ ಕೇಂದ್ರದಲ್ಲಿ ಆ. 26 ರಂದು ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಸದರಿ ದಿನಾಂಕದಂದು 66/11ಕೆ.ವಿ ಸಂತೆಪೇಟೆ ಹಾಸನ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಹುಣಸಿನಕೆರೆ, ಸಂತೆಪೇಟೆ, ಚನ್ನಪಟ್ಟಣ, ಎನ್.ಆರ್.ವೃತ್ತ ಸುತ್ತ ಮುತ್ತ, ಬೈಲಹಳ್ಳಿ, ಕೆಹೆಚ್ಬಿ, ಹನುಮಂತಪುರ, ಹೊಯ್ಸಳ ರೆಸಾರ್ಟ್, ವಲ್ಲಬಾಯ್ ರೋಡ್, ಹಾಸನಾಂಭ ವೃತ್ತ, ಮೈಕ್ರೋವೇವ್, ವಿಜಯನಗರ ಹಾಗೂ ಸುತ್ತಮುತ್ತಲ ವಿದ್ಯುತ್ ಸರಬರಾಜಾಗುವ ಪ್ರದೇಶಗಳ ವಿದ್ಯುತ್ ಸ್ಥಾವರಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕವಿಪ್ರನಿನಿ ಟಿ.ಎಲ್ ಮತ್ತು ಎಸ್.ಎಸ್ ವಿಭಾಗ, ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.