ಹಾಸನ : ಟ್ರಾನ್ಸ್‌ಫರಂ ದುರಸ್ತಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಹರಿದು ಕಂಬದ ಮೇಲೆಯೇ ಹಸುನೀಗಿದ ಮಂಜುನಾಥ್ (35 ) ದುರಂತ ಸಾವು

0

ಹಾಸನ / ಚನ್ನರಾಯಪಟ್ಟಣ : ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಸಬ್ಬನಹಳ್ಳಿಯಲ್ಲಿ ಗ್ರಾಮದಲ್ಲಿ ಇಂದು ನಡೆದ ಘಟನೆಯಲ್ಲಿ ಮನೆಯ ದುಡಿಯುವ ಕೈ ಕಳೆದುಕೊಂಡಿದೆ ., ಹೆಗ್ಗಡಿಹಳ್ಳಿ ಗ್ರಾಮದ ಮಂಜುನಾಥ್ (35) ಮೃತ ಸೆಸ್ಕ್‌ ನೌಕರ. ವಿದ್ಯುತ್‌ ಕಂಬದ ಮೇಲೇರಿ ಟ್ರಾನ್ಸ್‌ಫರಂ ದುರಸ್ತಿ ಮಾಡುತ್ತಿದ್ದರು ಇಂದು ಜು.19ಮಂಗಳವಾರ . ಈ ವೇಳೆ ತನಗೆ ಅರಿವೇ ಇಲ್ಲದಂತೆ ಆಕಸ್ಮಿಕವಾಗಿ ವಿದ್ಯುತ್‌ ಹರಿದು ಕಂಬದ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ. ನಂತರ ಸೆಸ್ಕ್ ಸಿಬ್ಬಂದಿ ಮಂಜುನಾಥ್ ಮೃತದೇಹ ವನ್ನು ಕಂಬದಿಂದ ಕೆಳಗಿಳಿಸಿದರು ಆದರೆ …

ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಕೆಲಕಾಲ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. , ಅಧಿಕಾರಿಗಳ ನಿರ್ಲಕ್ಷ್ಯವೇ ಲೈನ್‌ಮನ್ ಸಾವಿಗೆ ಕಾರಣ ಎಂದು ಮೃತನ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದರು., ಮಂಜುನಾಥ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ಬಗ್ಗೆ ಪರಿಶೀಲನೆ ನಡೆಯಲಿದೆ

LEAVE A REPLY

Please enter your comment!
Please enter your name here