ಆನೆ ದಾಳಿಗೆ ಶಾರ್ಪ್ ಶೂಟರ್ ಸಾವು ಪ್ರಕರಣ : ಮೃತನ ಕುಟುಂಬಕ್ಕೆ 10 ಲಕ್ಷ ರೂ. ಹೆಚ್ಚುವರಿ ಪರಿಹಾರ ಚೆಕ್ ವಿತರಿಸಿದ ಸರ್ಕಾರ

0

ಹಾಸನ ಜಿಲ್ಲೆಯ ಆಲೂರು ಬಳಿ ಗಾಯಗೊಂಡಿದ್ದ ಆನೆ (ಭೀಮ)ನಿಗೆ ಅರೆವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಆನೆ ದಾಳಿಗೆ ಒಳಗಾಗಿ ಮೃತಪಟ್ಟಿದ್ದ ಶಾರ್ಪ್ ಶೂಟರ್ H.H. ವೆಂಕಟೇಶ್ ಅವರ ಪುತ್ರ ಮೋಹಿತ್ ಮತ್ತು ಮಿಥುನ್ ಅವರಿಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ 10ಲಕ್ಷ ರೂಪಾಯಿಗಳ ಹೆಚ್ಚುವರಿ ಮೊತ್ತದ ಪರಿಹಾರದ ಚೆಕ್ ನೀಡಿ ಸಾಂತ್ವನ ಹೇಳಿದರು. ,ಈ ಸಂದರ್ಭದಲ್ಲಿ ಸಚಿವರುಗಳಾದ ಮಧು ಬಂಗಾರಪ್ಪ, ಮಾಂಕಾಳ ವೈದ್ಯ ಮತ್ತಿತರರು ಹಾಜರಿದ್ದರು. ನಿಯಮಾನುಸಾರ ಈಗಾಗಲೇ ಮೃತ ವೆಂಕಟೇಶ್ ಅವರು ಪತ್ನಿ G.S. ಮಂಜುಳಾ ಅವರಿಗೆ ಅರಣ್ಯ ಸಚಿವರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದ ವೇಳೆ 15ಲಕ್ಷ ರೂ. ಚೆಕ್ ವಿತರಿಸಿದ್ದರು

LEAVE A REPLY

Please enter your comment!
Please enter your name here