ನಿಮ್ಮ ಗಡಿಬಿಡಿ ಜೀವನ ಶೈಲಿಯಲ್ಲಿ ವಿಶ್ರಾಂತಿ, ನೆಮ್ಮದಿ ಅನ್ನುವುದು ಬಹಳ ಕಡಿಮೆ ಇದ್ದರೆ.ಇಲ್ಲಿದೆ ನಿಮಗೆ ಉಪಾಯ.ಇದು ನಮಗೆ ತಿಳಿದಿದ್ದರೂ ಮಾಡಲು ಸೋಂಬೇರಿತನ. ಯಾವುದು ಈ ಉಪಾಯ? “ಧ್ಯಾನ” ಇದನ್ನು ಓದುತ್ತಿರುವ ಜನರಲ್ಲಿ ಒಂದು ೩೦% ಜನ ಧ್ಯಾನವನ್ನು ಅಳವಡಿಸಿಕೊಂಡಿರಬಹುದು ಇನ್ನು ೭೦% ಜನ ಇದರ ಬಗ್ಗೆ ತಿಳಿದರೂ ಅಭ್ಯಾಸವನ್ನು ಅಳವಡಿಸಿಕೊಂಡಿರುವುದಿಲ್ಲ.
ಧ್ಯಾನದಿಂದ ಆಗುವ ಪ್ರಯೋಜನಗಳು ಹಲವಾರು,
ನಮ್ಮ ಮನಸ್ಸು ನಿರಾಳವಾಗುತ್ತದೆ, ನಿಮ್ಮ ಯೋಚನೆಗಳು ಧನಾತ್ಮಕವಾಗಿದೆ,ನಿಮ್ಮ ಮನಸ್ಸು ಯಾವಾಗಲೂ ಪ್ರಶಾಂತವಾಗಿರುತ್ತದೆ.ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗುತ್ತದೆ.ನಮ್ಮ ತಿಳಿವಳಿಕೆಯ ಶಕ್ತಿ ಸುಧಾರಿಸುತ್ತದೆ ಹೀಗೆ ಇದರಿಂದ ಆಗುವ ಪ್ರಯೋಜನಗಳು ಅಷ್ಟಿಷ್ಟಲ್ಲ.
![](https://hassananews.com/wp-content/uploads/2020/10/images-100_compress447387267721689820575..jpg)
• ಧ್ಯಾನ ಮಾಡುವುದರಿಂದ ನಿಮ್ಮ ಒತ್ತಡಗಳು ನಿವಾರಣೆಯಾಗುತ್ತದೆ.ಇದರಿಂದ ನಿಮ್ಮ ದೇಹ ಕೂಡ ಹಗುರವಾಗುತ್ತದೆ.ಧ್ಯಾನವನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ನಿಮ್ಮ ಶ್ವಾಸ ಕೋಶ ಕೂಡ ಸುಧಾರಿಸುತ್ತದೆ.
• ಧ್ಯಾನ ನಿಮ್ಮನ್ನು ಸಾಧಕರಾಗಿ ಮಾಡುತ್ತದೆ.ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸಿನ ಮೇಲೆ, ದೇಹದ ಮೇಲೆ ನಿಯಂತ್ರಣ ಸಿಗುತ್ತದೆ ಇದರಿಂದ ನೀವು ಯಾವುದೇ ಕೆಟ್ಟ ಆಲೋಚನೆಗಳಿಗೆ ಗುರಿಯಾಗುವುದಿಲ್ಲ ಹಾಗಾಗಿ ನೀವು ಸದಾ ಒಳ್ಳೆಯ ಆಲೋಚನೆಗಳನ್ನು ಸ್ವಾಗತಿಸುತ್ತಾ ನಿಮ್ಮ ಕೆಲಸವನ್ನು ನೆರವೇರಿಸಬಹುದು.
• ಧ್ಯಾನದಿಂದ ಉಸಿರಾಟ ತೊಂದರೆಗಳು ನಿವಾರಣೆಯಾಗುತ್ತದೆ. ವಯಸ್ಸಾದವರು ತಮ್ಮ ಉಸಿರಾಟ ಸಮಸ್ಯೆಗಳಿಂದ ಪಾರಾಗಬಹುದು.ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತದೆ ಎಕೆಂದರೆ ನೀವು ಧ್ಯಾನ ಮಾಡುವಾಗ ಹೆಚ್ಚು ಆಮ್ಲಜನಕವನ್ನು ಪಡೆಯುತ್ತೀರಿ.
![](https://hassananews.com/wp-content/uploads/2020/10/images-2020-10-18t1028252497406727960025021..jpg)
ಧ್ಯಾನವನ್ನು ಮಾಡಲು ಹಲವಾರು ರೀತಿಗಳಿವೆ ನೀವು ನಿಮಗೆ ಇಷ್ಟವಾದ ರೀತಿಯನ್ನು ಅಭ್ಯಾಸ ಮಾಡಿಕೊಳ್ಳಬಹುದು.ಯೂಟ್ಯೂಬ್ ನಲ್ಲಿ ಧ್ಯಾನವನ್ನು ಮಾಡುವ ಹಲವಾರು ರೀತಿಯನ್ನು ನೀವು ನೋಡಿ ಅಳವಡಿಸಿಕೊಳ್ಳಬಹುದು.ದಿನಕ್ಕೆ ಕನಿಷ್ಠ ೧೦-೨೦ ನಿಮಿಷ ಧ್ಯಾನ ಮಾಡಿದರೆ ನಿಮ್ಮ ಜೀವನ ಬಹಳ ಸುಖವಾಗಿರುತ್ತದೆ.
-ತನ್ವಿ .ಬಿ