ಹಾಸನ ನಗರದ ಬಿ.ಈ.ಜಿ ಕಾಲೇಜಿನ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಹಸಿರು ಗ್ರಾಮ- ಸ್ವಚ್ಚ ಗ್ರಾಮ ತರಬೇತಿ ಶಿಬಿರ

0

ಹಾಸನ ಮಾ.04 (ಹಾಸನ್_ನ್ಯೂಸ್ !! , ಪರಿಸರವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳೆಗೆಗೆ ಕೊಂಡೊಯ್ಯುವುದು  ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಸಹಾಯಕ ನಿರ್ದೇಶಕರಾದ ಸಿ.ಕೆ. ಹರೀಶ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

ನೆಹರು ಯುವ ಕೇಂದ್ರ, ಯುವ ಸಬಲೀಕರಣ ಕ್ರೀಡಾ ಇಲಾಖೆ, ನಿರಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಯುವಕ ಸಂಘ ಹಾಗೂ ವಾಲ್ಮೀಕಿ ಮಹಿಳಾ ಸಾಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ನಗರದ ಬಿ.ಈ.ಜಿ ಕಾಲೇಜಿನ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಹಸಿರು ಗ್ರಾಮ- ಸ್ವಚ್ಚ ಗ್ರಾಮ ತರಬೇತಿ ಶಿಬಿರ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲು ಪ್ರತಿಬೆ, ಕೌಶಲ್ಯವು ಇದೆ ಇರುತ್ತದೆ ಅದನ್ನು   ಬಳಸಿಕೊಂಡು ಉತ್ತಮ ವ್ಯಕ್ತಿಗಳಾಗಲು ಪ್ರಯತ್ನಿಸಿ ಎಂದು ಅವರು ಹೇಳಿದರು.

ಯುವ ಸ್ಪಂದನದ ಮೂಲಕ   ಯುವಕರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ   ಮತ್ತಿತರ ವಿಷಯಗಳ ಕುರಿತು ಮಾರ್ಗದರ್ಶನವನ್ನು ನೀಡುಲಾಗುತ್ತದೆ ಎಂದರು.

ನೆಹರು ಯುವ ಕೇಂದ್ರದ ಯುವಜನ ಅಧಿಕಾರಿ ಅಭಿಷೇಕ ಚವಾರೆ ಮಾತನಾಡಿ ನೀರು ಅತ್ಯಮೂಲ್ಯವಾಗಿದ್ದು ನೀರನ್ನು ಮಿತವಾಗಿ ಬಳಸಬೇಕು  ಎಂದರಲ್ಲದೆ ಮುಂದೊಂದು ದಿನ ನೀರಿಗೂ ಬೆಲೆ ತೆತ್ತಬೇಕಾಗುತ್ತದೆ ಈ ನಿಟ್ಟಿನಲ್ಲಿ ಮಳೆ ನೀರು  ಸಂಗ್ರಹಕ್ಕೆ ಒತ್ತು ನೀಡಬೇಕು ಎಂದರು.

ಬಿ. ಈ. ಜಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಅವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಕರು ಗ್ರಾಮೀಣ ಪ್ರದೇಶಗಳಲ್ಲಿ  ರೈತರಿಗೆ, ಜನಸಾಮಾನ್ಯರಿಗೆ, ಸ್ವಚ್ಚತೆಯ ಬಗ್ಗೆ ಅರಿವನ್ನು ಮೂಡಿಸಿ  ಎಂದು ಯುವಕರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾದ್ಯಪಕರಾದ ಸುಮ ವೀಣಾ  ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here