ತಾಯಿ ಯಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದ ಖದೀಮರಿಂದ ತಪ್ಪಿಸಿಕೊಂಡ ತಾಯಿ ಮಗ

0

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಅಕ್ಕನಹಳ್ಳಿ ಕ್ರಾಸ್ ಬಳಿ ಸರಗಳ್ಳರು ಅಡ್ಡಹಾಕಿದ್ದರಿಂದ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ದ್ಯಾವಲಾಪುರ ಗ್ರಾಮದ ಧರ್ಮೇಗೌಡ (49) ತಾಯಿ ರಂಗಮ್ಮ (70) ಕೆಳಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ ,‌ ಇದೇ ಹೋಬಳಿಯ ಹಿರೀಸಾವೆಗೆ ಸಂಬಂಧಿಕರ ಮನೆಗೆ ಹೋಗುವಾಗ ಅಕ್ಕನಹಳ್ಳಿ ಕ್ರಾಸ್ ಬಳಿ ಪಲ್ಸರ್ ಬೈಕ್ ನಲ್ಲಿ ಬಂದ ಸರಗಳ್ಳರು ತಾಯಿ ರಂಗಮ್ಮ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದ ಸಂದರ್ಭದಲ್ಲಿ ಧರ್ಮೇಗೌಡ ಪ್ರತಿರೋಧ ವ್ಯಕ್ತಪಡಿಸಿ , ಸೆಣೆಸಾಡಿದರು. ಆಗ ಆಯತಪ್ಪಿ ಬಿದ್ದು ಗಾಯಗೊಂಡರು. ಈ ನಡುವೆ ಕಳ್ಳರು ಹೆದರಿ ತಪ್ಪಿಸಿಕೊಂಡಿದ್ದಾರೆ. , ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ , ಅದೃಷ್ಟವಶಾತ್ ತಾಯಿಯ ಚಿನ್ನದ ಸರ ಉಳಿಯಿತು , ಪ್ರಾಣಕ್ಕು‌‌ ತೊಂದರೆಯಾಗಲಿಲ್ಲ . , ರಾಬರಿಗೆ ಯತ್ನಿಸದವರ ಹುಡುಕಾಟದಲ್ಲಿದ್ದಾರೆ ಪೊಲೀಸರು. ,

ಬೈಕ್‌ನಲ್ಲಿ ಕುಳಿತ್ತಿದ್ದ ತಾಯಿಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಖದೀಮರ ಯತ್ನ

ದಿ:15/05/2023 ರಂದು ಚನ್ನರಾಯಪಟ್ಟಣ ತಾ. ನುಗ್ಗೇಹಳ್ಳಿ ಹೋ, ದ್ಯಾವಲಾಪುರ ಗ್ರಾಮದ ವಾಸಿಯಾದ ರಂಗಮ್ಮರವರು ತಮ್ಮ ಮಗ ಧರ್ಮೇಗೌಡ ರವರೊಂದಿಗೆ ಹಿರಿಸಾವೆಯ ಶಿವಶ್ರೀ ಛತ್ರದಲ್ಲಿ ಸಂಬಂಧಿಕರ ವಿವಾಹವಿದ್ದರಿಂದ ಮದುವೆಗೆ ಹೋಗಲು ಕೆಎ13-ವೈ5434 ಸಂಖ್ಯೆಯ ಟಿ.ವಿ.ಎಸ್ ಎಕ್ಸ್.ಎಲ್ ಬೈಕಿನಲ್ಲಿ ಬೆಳಿಗ್ಗೆ ಸುಮಾರು 08:40 ಗಂಟೆ ಸಮಯದಲ್ಲಿ ಅಕ್ಕನಹಳ್ಳಿ ಕೂಡು ಬಿಟ್ಟು ಸ್ವಲ್ಪ ಮುಂದೆ ನುಗ್ಗೇಹಳ್ಳಿ-ಹಿರಿಸಾವೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಯಾವುದೋ ಬೈಕಿನಲ್ಲಿ ಬಂದ ಒಬ್ಬ ಆಸಾಮಿಯು ಏಕಾಏಕಿ

ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಬೈಕ್‌ ಸಮೇತ ರಂಗಮ್ಮ ಹಾಗು ಧರ್ಮೇಗೌಡ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದ- ರಿಂದ ಮಾಂಗಲ್ಯಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದ ಆಸಾಮಿಯು ಹೊರಟು ಹೋಗಿದ್ದು, ಬೈಕ್‌ನಿಂದ ಬಿದ್ದಿದ್ದರಿಂದ ಇಬ್ಬರಿಗೂ ದೇಹದ ಭಾಗಗಳಿಗೆ ಪೆಟ್ಟಾಗಿದ್ದು, ಅಪರಿಚಿತನನ್ನು ಪತ್ತೆಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು, ರಂಗಮ್ಮ ರವರು ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.

LEAVE A REPLY

Please enter your comment!
Please enter your name here