ಹಾಸನ / ಅರಸೀಕೆರೆ : ಕ್ರೈಂ ಸುದ್ದಿ ಹಾಸನ ;
• ಅರಸೀಕೆರೆ ನಗರ ಹೊರವಲಯದ ಮಾಲೇಕಲ್ ತಿರುಪತಿ ಬೆಟ್ಟದ ಬಳಿಯ ಕಾರೇಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ರೌಡಿ ಶೀಟರ್ ನವಾಜ಼್ (26) ಎಂಬಾತನ ಹತ್ಯೆ
![](https://hassananews.com/wp-content/uploads/2021/08/PicsArt_08-12-02.16.28.jpg)
• 2016ರಲ್ಲಿ ಅರಸೀಕೆರೆ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದ ವರುಣ್ ಭೀಕರ ಹತ್ಯೆ ಪ್ರಮುಖ ಆರೋಪಿ ಇದೇ ರೌಡಿ ಶೀಟರ್ ನವಾಜ್ (26) ನನ್ನು ಮಂಗಳವಾರ(10Aug2021) ರ ಸಂಜೆ ಕೊಲೆ ಮಾಡಿರೋ ವಿಷಯ, ಬುಧವಾರ(11Aug2021) ಪ್ರಕರಣ ಬೆಳಕಿಗೆ ಬಂದು ಹಾಸನ ಜಿಲ್ಲೆ ಸೇರಿ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ
![](https://hassananews.com/wp-content/uploads/2021/08/385e49_333763_4_P_1_mr.jpg)
ಮೃತ ಯುವಕನ ಮರಣೋತ್ತರ ಪರೀಕ್ಷೆ ಬಳಿಕ ಅರಸೀಕೆರೆ ನಗರದ B.H. ರಸ್ತೆಯ ಖಬರಸ್ತಾನ ದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಅಂತ್ಯಕ್ರಿಯೆ ನಡೆಯಿತು. , ಇದಕ್ಕು ಮುನ್ನ ಈತನ ಸ್ನೇಹಿತರು ಸಹಚರರು ಹಾಸನ ನಗರ ಆಸ್ಪತ್ರೆ ಅಥವಾ ಅರಸೀಕೆರೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸೋ ವಿಚಾರದಲ್ಲಿ ಗೊಂದಲವಾಗಿತ್ತು
![](https://hassananews.com/wp-content/uploads/2021/08/received_370382091354797-1.jpeg)
” ಅರಸೀಕೆರೆ ನಗರದಲ್ಲಿ ಗಾಂಜಾ ಮಾರಾಟ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ನವಾಜ್, ಜೈಲಿಗೆ ಹೋಗಿ ಬಂದಿದ್ದ. ಸ್ನೇಹಿತನ ಬಳಿ ಸುಮಾರು ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದ. ಹಣ ಹಿಂದಿರುಗಿಸಲು ಸತಾಯಿಸುತ್ತಿದ್ದ. ಇದಾದ ನಂತರ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಹತ್ಯೆಯಾಗಿದೆ. ತನಿಖೆ ಚುರುಕುಗೊಳಿಸಿದ್ದು, ಸದ್ಯದಲ್ಲೇ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು ” -ನಾಗೇಶ್ (DYSP)
” ಕೊಲೆಯಾಗಿರುವ ನವಾಜ್ ರೌಡಿ ಚಟುವಟಿಕೆ ಬಿಟ್ಟು ಹೋಟೆಲ್ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ. ಕೊಲೆ ಆರೋಪಿ ಗಳನ್ನು ಪೊಲೀಸರು ತಕ್ಷಣವೇ ಬಂಧಿಸಿ, ಅವರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ” – ಸಯ್ಯದ್ ಸರ್ದಾರ್ (ಅರಸೀಕೆರೆ ಮುಸ್ಲಿಂ ಜಮಾತ್ ಕಮಿಟಿ)
![](https://hassananews.com/wp-content/uploads/2021/08/received_370382091354797.jpeg)
JOB TITLE: In shop sales at electronic showroom.
GENDER: men
Company requirements: Any Degree holder, with sales skills, customer handling skills, communication.
Experiance: experience Or fresher.
Salary: 15000 + incentives
NOTE: CANDIDATE SHOULD BE IN HASSAN LOCALITY
contact for more details: 8792953058
#crimedairyhassan #arsikere #hassan #hassanpolice #hassannews