ಹಾಸನ,ನ.07(ಹಾಸನ್_ನ್ಯೂಸ್):- ರಸ್ತೆ ನಿರ್ಮಾಣದಲ್ಲಿ, ಗಣಿಗಾರಿಕೆಯಲ್ಲಿ,
![](https://hassananews.com/wp-content/uploads/2020/11/vijaya-karnataka-1.jpg)
ಇಳಿಜಾರು ಭೂಮಿಯಲ್ಲಿ ತೆಂಗಿನ ನಾರಿನ ಭೂವಸ್ತ್ರವನ್ನು ಹೊದಿಸುವುದರಿಂದ ಭೂಮಿಯ ಸವೆತವನ್ನು ತಡೆಗಟ್ಟಬಹುದಾಗಿದೆ.
![](https://hassananews.com/wp-content/uploads/2020/11/vijaya-karnataka-1024x767.jpg)
ಇದರಿಂದ ರಸ್ತೆಯು ಗಟ್ಟಿಯಾಗುವುದಲ್ಲದೆ ರಸ್ತೆಗೆ ಬಿರುಕು ಉಂಟಾಗುವುದಿಲ್ಲ,
![](https://hassananews.com/wp-content/uploads/2020/11/Coir_fibery.jpg)
ಗುಣಮಟ್ಟದ ದೀರ್ಘಕಾಲ ಬಾಳಿಕೆಯನ್ನು ಸಾಧಿಸಬಹುದಾಗಿದೆ. ಇದಲ್ಲದೆ,
![](https://hassananews.com/wp-content/uploads/2020/11/coconut.jpg)
ಕೃಷಿ ಹೊಂಡ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ರಸ್ತೆ, ನೀರಾವರಿ ಕಾಲುವೆಗಳು,
![](https://hassananews.com/wp-content/uploads/2020/11/41611720_232908847385825_9149189013825912832_n.jpg)
ಕಟ್ಟಡ ಮೇಲ್ಚಾವಣಿ, ಸೇತುವೆ ಇತರೆ ಕಾಮಗಾರಿಗಳಲ್ಲಿ ಸಹ ತೆಂಗಿನ ನಾರಿನ ಭೂವಸ್ತ್ರವನ್ನು ಉಪಯೋಗಿಸಬಹುದಾಗಿದೆ.
![](https://hassananews.com/wp-content/uploads/2020/11/pic.jpg)
ತೆಂಗಿನ ನಾರಿನ ಭೂವಸ್ತ್ರವನ್ನು ಉಪಯೋಗಿಸುವ ಬಗ್ಗೆ ನ.10 ರಂದು ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸಭಾಂಗಣ,
![](https://hassananews.com/wp-content/uploads/2020/11/Dry-Coconut-1.jpg)
ಡೈರಿ ವೃತ್ತ, ಹಾಸನ ಇಲ್ಲಿ, ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಆಸಕ್ತರು ಸದರಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆಯಬಹುದಾಗಿದೆ – ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು , ಹಾಸನ