ಹಾಸನ: ಕಾಡಾನೆ ದಾಳಿಗೆ ಯುವಕ ಸಾವನ್ನಪ್ಪಿರುವ ಘಟನೆ ಹಾಸನ ಸಕಲೇಶಪುರ ಬಾಳ್ಳುಪೇಟೆಯ ಗಾಳಿಗುಡ್ಡ ಗ್ರಾಮದಲ್ಲಿ ನಡೆದಿದೆ. ರವಿ (48) ಆನೆ ದಾಳಿಗೆ ಬಲಿಯಾದವ.
![](https://hassananews.com/wp-content/uploads/2022/05/IMG-20220510-WA0023.jpg)
ಹಾಸನ ಸಕಲೇಶಪುರದಲ್ಲಿ ಜನರ ಮೇಲೆ ಕಾಡಾನೆ ದಾಳಿ ಮುಂದುವರಿದಿದ್ದು, ಕಾಫಿ ತೋಟದ ಕೆಲಸ ಮಾಡುತ್ತಿದ್ದ ಒರ್ವನ ಮೇಲೆ ಆನೆ ಹಿಂಬದಿಯಿಂದ ಗುದ್ದಿದ ರಭಸಕ್ಕೆ ನೆಲಕ್ಕಪ್ಪಳಿಸಿದ ರವಿ , ಸ್ಥಳದಲ್ಲೇ ಸಾವನ್ನಪ್ಪಿದ್ದು . ಮುಖ ಸೇರಿದೇಹದ ಹಲವು ಅಂಗಾಗಗಳಿಗೆ ಗಾಯಗಳಾಗಿರುವ ಗುರುತುಗಳಿವೆ
ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದರಿಂದ ರವಿ ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು , ಈಗಾಗುತ್ತದೆ ಎಂದು ಯೋಚಿಸಿರಲಿಲ್ಲ , ಗರಬಡಿದಂತಾಗಿದೆ
![](https://hassananews.com/wp-content/uploads/2022/05/IMG-20220510-WA0024.jpg)
ಕಾಡಾನೆಗಳ ಹಾವಳಿಯಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದು, ಈ ಬಗ್ಗೆ ಕ್ರಮಕೈಗೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಭಾರೀ ಆಕ್ರೋಶ ಹೊರಹಾಕಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಸಕಲೇಶಪುರ ಬಂದ್ ಮಾಡಲು ಸಾರ್ವಜನಿಕ ವಲಯದಿಂದ ಹಲವು ಸಂಘಟನೆಗಳು ನಾಳೆ 11 ಮೇ ಬುಧವಾರ ಬೃಹತ್ ಪ್ರತಿಭಟನೆ ಹಾಗೂ ರಸ್ತೆ ತಡೆಗೆ ಮುಂದಾಗಿದೆ ಎನ್ನಲಾಗಿದೆ