ಸಕಲೇಶಪುರ: ಕಾಡಾನೆ ದಾಳಿಯಿಂದಾಗಿ ತಾಲೂಕಿನಲ್ಲಿ ಬೆಳಗೋಡು ಹೋಬಳಿ ಸಮೀಪ ಮನು ( 32 ) ಎಂಬ ರೈತ ಮೃತಪಟ್ಟಿರುವುದರಿಂದ ಈತನ ಕುಟುಂಬ ಅಕ್ಷರಶಃ ಅನಾಥವಾಗಿದೆ
![](https://hassananews.com/wp-content/uploads/2022/11/IMG_20221101_125830_650-576x1024.jpg)
ಮೃತ ಮನುವಿಗೆ ಪತ್ನಿ ಹಾಗೂ ಮೂರುವರೆ ವರ್ಷದ ಮಗನಿದ್ದು ಮನುವಿನ ಸಾವಿನಿಂದ ಕುಟುಂಬ ಸಂಕಷ್ಠಕ್ಕೆ ಸಿಲುಕಿದೆ. ಮನುವಿನ ಮನೆಯ ಪಕ್ಕದಲ್ಲೆ ಈತನ ಅಣ್ಷನ ಕುಟುಂಬವಿದ್ದು ಮನುವಿನ ಅಣ್ಣ ಹಾಗೂ
![](https://hassananews.com/wp-content/uploads/2022/11/InShot_20221101_132645183-1-577x1024.jpg)
ತಾಯಿ ಸಹ ಮನುವಿನ ಸಾವಿನಿಂದ ದಿಗ್ರಮೆಗೆ ಒಳಗಾಗಿದ್ದಾರೆ. ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಸುಮಾರು 75 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.ಆದರು ಸಹ ಸರ್ಕಾರಗಳು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿರುವುದು ದುರಂತವಾಗಿದೆ
![](https://hassananews.com/wp-content/uploads/2022/11/IMG-20221101-WA0258-1.jpg)
ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದ್ದ ತಾಲೂಕಿನ ಹಾನುಬಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾದ್ಯಯ ಎಸ್.ದೇವೆಗೌಡ ಸೋಮವಾರ ರಾತ್ರಿ ನಿಧನರಾದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು
![](https://hassananews.com/wp-content/uploads/2022/11/IMG-20221101-WA0177-1068x8012-1-1.jpg)
ಶತಾಯುಷಿ ಶಾಲೆಗೆ 9-00 ಗಂಟೆಗೆ ತಂದು ಹತ್ತು ನಿಮಿಷಗಳ ಕಾಲ ಇಟ್ಟು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು
![](https://hassananews.com/wp-content/uploads/2022/11/IMG-20221101-WA0175-768x576-2.jpg)
ಈ ಸಂಧರ್ಭದಲ್ಲಿ ಹಾನುಬಾಳುನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶಾಲೆಯಲ್ಲಿ ಪ್ರೀತಿಯ ಗುರುಗಳಿಗೆ ಅಂತಿಮ ನಮನ ಸಲ್ಲಿಸಲಾಯಿತು.