ಹಾಸನ ನಗರಸಭೆ ವ್ಯಾಪ್ತಿಯ ಬಿಡಾಡಿ ನಾಯಿಗಳ ಸೆರೆಗೆ ಶೀಘ್ರದಲ್ಲೇ ಕಾರ್ಯಾಚರಣೆಗೆ ಯೋಜನೆ
ಹಾಸನ ನಗರದಲ್ಲಿ ಬಿಡಾಡಿ ಶ್ವಾನಗಳ ಹಾವಳಿ ಬಗ್ಗೆ ಸಾರ್ವಜನಿಕರಿಂದ ನೂರಾರು ದೂರು ಹಿನ್ನೆಲೆ ನ್ಯಾಯಾಲಯದ ಆದೇಶದ ಪ್ರಕಾರ, ಬೀದಿನಾಯಿಗಳನ್ನು ಹಿಡಿದು ಕೊಲ್ಲಲು ಅವಕಾಶ ಇಲ್ಲ ಕಸೆರೆಹಿಡಿದು ಸಂತಾನ ಶಕ್ತಿಹರಣ ಮಾಡಬಹುದು ಅಂತೆಯೇ , ಹಾಸನ ನಗರಸಭೆಯ 35 ವಾರ್ಡ್ ವ್ಯಾಪ್ತಿ ಏನಿಲ್ಲ ಅಂದರು 3 ಸಾವಿರ ನಾಯಿಗಳು ಎಣಿಕೆಗೆ ಸಿಕ್ಕಿವೆ , ನಾಯಿ ಸೆರೆ ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ 950₹ ರಂತೆ ಒಂದು ನಾಯಿಗನುಗುಣವಾಗಿ ನಿಗದಿ
![](https://hassananews.com/wp-content/uploads/2021/06/img-20210630-wa00094120308859738800736-1024x690.jpg)
ಕಳೆದ ಮೂರು ವರ್ಷದಲ್ಲಿ 350 ಬಿಡಾಡಿ ನಾಯಿಗಳ ಸೆರೆಯಾಗಿ , ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಅದಾಗಿ ಅದರ ಪೋಷಣೆಯುನಡೆದಿದೆ
ಈ ಸಾಲಿನಲ್ಲಿ ಕನಿಷ್ಠ ಒಂದು ಸಾವಿರ ನಾಯಿಗಳನ್ನು ಹಿಡಿಯುವ ಗುರಿ
ಬೀದಿನಾಯಿಗಳನ್ನು ಸೆರೆ ಹಿಡಿದು ಹಾಗೆಯೇ ಬಿಡುವಂತೆ ಇಲ್ಲ ., ಹಿಡಿದ ಕೆಲವೇ ಗಂಟೆಗಳಲ್ಲಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ, 6 ತಿಂಗಳ ಕಾಲ ಅವುಗಳನ್ನು ಆರೈಕೆ ನಡೆಸಿ ಪಶು ಸಂಗೋಪನಾ ಇಲಾಖೆಯ ನಿರ್ದೇಶನದ ಪ್ರಕಾರ ನಾಯಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆ ಆಗಿ ಚೆನ್ನಾಗಿ ನೋಡಿಕೊಳ್ಳಬೇಕು
![](https://hassananews.com/wp-content/uploads/2021/06/img-20210630-wa00077626842586652674109.jpg)
ಇದಕ್ಕೆ ಬೋನ್ ವ್ಯವಸ್ಥೆ ಮಾಡಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ನಾಯಿಗಳ ಜೀವಕ್ಕೆ ಯಾವುದೇ ಹಾನಿಯಾಗದಂತೆ ವೈಜ್ಞಾನಿಕವಾಗಿ ಹಿಡಿದು ರಕ್ಷಿಸುವ ಹೊಣೆ ಅವರದು
-ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ