ಇಸ್ರೇಲ್‌ನಲ್ಲಿ ಸಿಲುಕಿರುವ ಹಾಸನದ 20ಕ್ಕೂ ಹೆಚ್ಚು ಮಂದಿ

0

ಹಾಸನ: ಯುದ್ಧ ಪೀಡಿತ ಇಸ್ರೇಲ್ ನಲ್ಲಿ ಹಾಸನ ಜಿಲ್ಲೆಯ ಸುಮಾರು 20 ಕ್ಕೆ ಹೆಚ್ಚು ಮಂದಿ ಸಿಲುಕಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಡಿಂಕ, ಸಕಲೇಶಪುರ ತಾಲೂಕಿನ ಲಕ್ಕುಂದ ಅಂಕಿಹಳ್ಳಿ, ಬೆಳಗೋಡು ಗ್ರಾಮದವರಾದ ಜಾನ್ಸನ್ ನವೀನ್ ಡಿ ನಾ ಡಿಸೋಜಾ, ಎಲ್ಲಿಜಾ ಪಿಂಟು, ಆಂಥೋನಿ ಡಿಸೋಜಾ, ಕೃಷ್ಣಗೌಡ ನರ್ಸಿಂಗ್ ಹಾಗೂ ಇತರೆ ಉದ್ಯೋಗ ಮಾಡುತ್ತಿದ್ದಾರೆ.

ಇವರು ಜೆರುಸಿಲಿಯಂ, ಎಲ್ಲಿವಿಯಲ್ಲಿ ನೆಲೆಸಿದ್ದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿಂಕ ಗ್ರಾಮದ ಕೃಷ್ಣಗೌಡ ಸುಮಾರು 20 ವರ್ಷಗಳಿಂದ ಇಸ್ರೇಲ್ ನಲ್ಲಿ ನೆಲೆಸಿದ್ದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನ ಸಹೋದರ ಮಹದೇವ್ ಅವರ ಜೊತೆ ಫೋನ್ ನಲ್ಲಿ ಮಾತನಾಡಿರುವ ಅವರು ಯುದ್ಧ ನಡೆಯುತ್ತಿದೆ. ರಾಕೆಟ್ ನಡೆಸುತ್ತಿರುವುದು ಕಂಡಿರುವುದಾಗಿ ತಿಳಿಸಿರುವ ಅವರು ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here