ಹಾಸನ ಮಾ.18 (ಹಾಸನ್_ನ್ಯೂಸ್ !, ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು ಕರ್ನಾಟಕದ ವಿವಿಧ ಜಿಲ್ಲೆಗಳ ರೈತರ ವತಿಯಿಂದ ಬೃಹತ್ ಸಾವಯವ ಮೇಳವನ್ನು ಮಾ. 20 ಮತ್ತು 21 ರಂದು ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದ ಬಳಿ ಇರುವ ಬಾಲಂಭಟ್ ಸಭಾಂಗಣದಲ್ಲಿ ಏರ್ಪಡಿಸಿದ್ದಾರೆ.
![](https://hassananews.com/wp-content/uploads/2021/03/Savayava.jpg)
ಎರಡು ದಿನಗಳ ಈ ಮೇಳದಲ್ಲಿ ಶಿರಸಿ, ತಿಪಟೂರು, ಅರಸೀಕೆರೆ, ದಾವಣಗೆರೆ, ಹುಲಿಕೆರೆ, ಚಿತ್ರದುರ್ಗ, ಪಾವಗಡ, ಬಳ್ಳಾರಿ, ಹಾವೇರಿ, ಕಡೂರು, ಬಾಗಲಕೋಟೆ, ಚನ್ನರಾಯಪಟ್ಟಣದಿಂದ ಹಾಗೂ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಆಗಮಿಸುವ 25 ಸಾವಯವ ರೈತರು ತಾವೇ ಬೆಳೆಸಿದ ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.
![](https://hassananews.com/wp-content/uploads/2021/03/pic-1-821x1024.jpg)
ಕೈತೋಟ ಕ್ರಾಂತಿ ಕಾರ್ಯಕ್ರಮದ ಅಂಗವಾಗಿ ವಿವಿಧ ತರಕಾರಿ ಇತ್ಯಾದಿ ಸಸಿಗಳ ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿದ್ದು ಸಾವಯವ ಪಾನೀಯ ಮತ್ತು ತಿಂಡಿತಿನಿಸುಗಳೂ ಖರೀದಿಗೆ ಲಭ್ಯವಿರುತ್ತದೆ.
![](https://hassananews.com/wp-content/uploads/2021/03/vajubhaivala4-1542118183.jpg)
ಕೋವಿಡ್ 19 ಮಾರ್ಗ ಸೂಚಿಗಳನ್ವಯ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಲು ಸಾವಯವ ಕೃಷಿ-ಗ್ರಾಹಕರ ಬಳಗದ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.
![](https://hassananews.com/wp-content/uploads/2021/03/pic-1024x680.jpg)
ಹೆಚ್ಚಿನ ಮಾಹಿತಿಗಾಗಿ 9448549130, 9448835606, 9880085845 ಗೆ ಸಂಪರ್ಕಿಸಬಹುದಾಗಿದೆ.