![](https://hassananews.com/wp-content/uploads/2023/09/WhatsApp-Image-2023-09-23-at-4.36.49-PM-1-1024x768.jpg)
ಹಾಸನದಲ್ಲಿ ಅಸ್ಸಾಂ ಮೂಲದ ಯುವಕನಿಗೆ ರಸ್ತೆ ಅಪಘಾತವಾಗಿತ್ತು, ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ತಲೆಗೆ ಹೆಚ್ಚಯ ಪೆಟ್ಟು ಬಿದ್ದ ಕಾರಣ ಹಾಸನನಗರದ ಜನಪ್ರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ದುರದೃಷ್ಟವಶಾತ್ ‘ನೂರ್ ಅಮೀನ್’ ಎಂಬ ಯುವಕ ಸಾವನ್ನಪ್ಪಿದ್ದು
ನಂತರ ದೂರದ ಅಸ್ಸಾಂ ವರೆಗೂ ಕರೆದುಕೊಂಡು ಹೋಗ ಆಗದೇ ಆರ್ಥಿಕ ಕೊರತೆಯದ ನೋವಿನಲ್ಲಿದ್ದ ಅಸ್ಸಾಂ ಮೂಲದ ಕುಟುಂಬಕ್ಕೆ, ಹಾಸನ SDPI ನೆರವಿಗೆ ಬಂದು ಎಲ್ಲಾ ಅಂತಿಮ ವಿಧಿವಿಧಾನಗಳ ನೆರವೇರಿಸಿಕೊಟ್ಟು ಮಾನವೀಯತೆ ಮೆರೆದ ಘಟನೆ ನಡೆದಿದೆ. ನೂರ್ ಅಮೀನ್ ಕುಟುಂಬದ ವತಿಯಿಂದ ಎಸ್ ಡಿಪಿಐ ಕಾರ್ಯಕರ್ತರಾದ ಶಜೀಲ್ ಅಹಮದ್, ಸಲೀಂ, ಗುಲಾಬ್, ಯೂಸುಫ್, ಇರ್ಫಾನ್, ರೋಮನ್, ಇನ್ನಿತರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
![](https://hassananews.com/wp-content/uploads/2023/09/WhatsApp-Image-2023-09-23-at-4.36.50-PM-461x1024.jpg)