ಅದು ರಾತ್ರಿ 11.30ರ ಸುಮಾರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಸಮೀಪ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಉಪವಿಭಾಗಾಧಿಕಾರಿ ಅವರು ತಡೆದು ತಪಾಸಣೆ ನಡೆಸಿದಾಗ ಪರವಾನಗಿ ಇಲ್ಲದ್ದು ಗೊತ್ತಾಗಿದೆ., ನಂತರ
![](https://hassananews.com/wp-content/uploads/2022/06/sand.jpeg)
ಮರಳು ಎಲ್ಲಿಂದ ಸಾಗಣೆ ಮಾಡಲಾಗುತ್ತಿದೆ ಎಂದು ಚಾಲಕನಲ್ಲೇ ಮಾಹಿತಿಪಡೆದು ಹಲವರ ಒಡಗೂಡಿ ., ಹೊರಟು ಸಕಲೇಶಪುರ ತಾಲ್ಲೂಕಿನ ಹಾಲೇ ಬೇಲೂರು ಸಮೀಪದ ಕಣಿವೆಮನೆಯಲ್ಲಿ ಹೇಮಾವತಿ ನದಿ ದಡದಲ್ಲಿ ಕಾನೂನು ಉಲ್ಲಂಘಿಸಿ ಮರಳು ಗಣಿಗಾರಿಕೆ ನಡೆಸುತ್ತಿರೋದು ಬಟಾಬಯಲಾಗಿದೆ , ಪ್ರತೀಕ್ ಬಯೋಲ್ ಅವರಿಗೆ .,
![](https://hassananews.com/wp-content/uploads/2022/06/product-500x500-1.jpeg)
ನೈಸರ್ಗಿಕ ಸಂಪತ್ತು ಅಕ್ರಮ ಸಾಗಣೆ ಆರೋಪದಡಿ ; ಎರಡು ಹಿಟಾಚಿ, 3 ಟಿಪ್ಪರ್, ಒಂದು ಕಾರು , ಜನರೇಟರ್, 15HP , 5HP ಎರಡು ಪಂಪ್ಸೆಟ್, 2.5 ಇಂಚು ಅಗಲದ 48 ಪೈಪ್ಗಳನ್ನು ವಶಪಡಿಸಿಕೊಂಡಿದ್ದು
![](https://hassananews.com/wp-content/uploads/2022/06/5049e4_382009_2_P_1_mr.jpg)
ದಾಳಿಯಲ್ಲಿ ಗಣಿ ಮತ್ತು ಭೂ–ವಿಜ್ಞಾನಿ ಸಿ. ಲಕ್ಷ್ಮಿಕಿರಣ್, ಶಿರಸ್ತೇದಾರ್ ತನ್ವೀರ್ ಅಹಮ್ಮದ್, ಪೊಲೀಸರು ಇದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಆದೇಶಿಸಿದ್ದಾರೆ . ಹಾಗೂ ಇವರ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗೂ ಪ್ರಶಂಸೆಗೆ ಒಳಪಟ್ಟಿದೆ .