ಹಾಸನ ಜ.5(ಹಾಸನ್_ನ್ಯೂಸ್ );- ಡಾ: ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಇವರ ವತಿಯಿಂದ ಪರಿಶಿಷ್ಟ ಜಾತಿಯ ಎಸ್.ಎಸ್.ಎಲ್.ಸಿ. ಪಾಸಾದ ಹಾಗೂ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಹಾಗೂ
![](https://hassananews.com/wp-content/uploads/2021/01/ma-television-journalism-1024x520.jpg)
ಡಿ.19.12.2020 ಕ್ಕೆ 18 ವರ್ಷ ಹಾಗೂ ಮೇಲ್ಪಟ್ಟು ಗರಿಷ್ಟ 30 ವರ್ಷದೊಳಗಿರುವ ನಿರುದ್ಯೋಗಿ ವಿದ್ಯಾವಂತ ಯುವಕ / ಯುವತಿಯರಿಗೆ Television Journalism, Camaranman Training ತರಬೇತಿಗಳನ್ನು ಮಂಡ್ಯದಲ್ಲಿರುವ ತರಬೇತಿ ಸಂಸ್ಥೆಯಲ್ಲಿ ನೀಡಲಾಗುವುದು.
![](https://hassananews.com/wp-content/uploads/2021/01/MDR_Kripo_live-1024x777.jpg)
ತರಬೇತಿಯು 3 ತಿಂಗಳ ಅವಧಿಯಾಗಿದೆ.
ತರಬೇತಿ ಪಡೆಯಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಜಿಲ್ಲಾ ವ್ಯವಸ್ಥಾಪಕರು, ಡಾ:ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ, ಎಸ್.ಬಿ.ಎಂ.ಕಾಲೋನಿ, ಅರಸೀಕೆರೆ ರಸ್ತೆ, ಹಾಸನ ಇವರಿಂದ ಅರ್ಜಿ ನಮೂನೆಯನ್ನು ಪಡೆದು ಅರ್ಜಿಯೊಂದಿಗೆ ಪೋಟೋ, ಜೀವಿತಾವಧಿಯ ಜಾತಿ ಪ್ರಮಾಣ ಪತ್ರ, 5 ವರ್ಷ ಅವಧಿಯವರಿಗೆ ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ, ಆಧಾರ್ಕಾರ್ಡ್, ರೇಷನ್ಕಾರ್ಡ್, 10ನೇ ತರಗತಿ ಉತ್ತೀರ್ಣಗೊಂಡಿರುವ ಅಂಕಪಟ್ಟಿ (ಕಡ್ಡಾಯವಾಗಿ ಸಲ್ಲಿಸ ತಕ್ಕದ್ದು),
![](https://hassananews.com/wp-content/uploads/2021/01/broadcast-journalist-8.jpg)
ಯಾವುದೇ ಪದವಿಯ ಅಂಕಪಟ್ಟಿಗಳನ್ನು ದ್ವಿಪ್ರತಿಯಲ್ಲಿ ಜಿಲ್ಲಾ ಕಚೇರಿಗೆ ಜ.25 ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಡಾ:ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ಎಸ್.ಬಿ.ಎಂ. ಕಾಲೋನಿ ಅರಸೀಕೆರೆ ರಸ್ತೆ ಹಾಸನ ಇವರಿಗೆ ಸಲ್ಲಿಸಬವುದು.
![](https://hassananews.com/wp-content/uploads/2021/01/thumbs_b2_788d986905533aba051261497ecffcbb-1024x575.jpg)
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08172-267213 / 9448569023
![](https://hassananews.com/wp-content/uploads/2021/01/camera-operator-1024x670.jpg)