ಹಾಸನ : ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ನಗರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಡಿ.ಆರ್. ಭಾಗ್ಯ ಆಯ್ಕೆ
ನಗರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಬಿ.ಆರ್.ಜ್ಯೋತಿ ಹಾಗೂ ಡಿ.ಆರ್.ಭಾಗ್ಯ ಸ್ಪರ್ಧಿಸಿದ್ದರು. 17 ಸದಸ್ಯರ ಗ್ರಾಮ ಪಂಚಾಯಿತಿಯಲ್ಲಿ ಡಿ.ಆರ್.ಭಾಗ್ಯ 9 ಮತಗಳನ್ನು ಪಡೆದು ಆಯ್ಕೆಯಾದರು. ಬಿ.ಆರ್. ಜ್ಯೋತಿ 8 ಮತಗಳನ್ನು ಪಡೆದರು. ಚುನಾವಣಾಧಿಕಾರಿ ಪಿಡಿಒ ಮಹೇಶ್ ಹಾಗೂ ಸದಸ್ಯರು ಮುಂಭಾಗದಲ್ಲಿ ಚುನಾವಣೆ ಯಲ್ಲಿ ಗೆದ್ದ ಇವರಿಗೆ ಸನ್ಮಾನಿಸಿ ಅಧಿಕಾರ ಹಸ್ತಾಂತರಿಸಲಾಯಿತು ಇದ್ದರು.