ಹೋಬಳಿ ಮಟ್ಟದ ಕ್ರೀಡಾಕೂಟ
ಕೆ.ಹೊಸಕೋಟೆ
ಎಸ್.ಕೆ.ಎನ್.ಆರ್.ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ :

0

ಆಲೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.ಆಲೂರು ತಾಲ್ಲೂಕು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆಲೂರು. ಹಾಗೂ ಬಿ.ಎಸ್.ಎನ್.ಹೆಚ್. ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕೆ.ಹೊಸಕೋಟೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕೆ.ಹೊಸಕೋಟೆಯ ಎಸ್.ಕೆ.ಎನ್.ಆರ್.ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ದೊರೆತಿದೆ.ಬಾಲಕರ ವಿಭಾಗದಲ್ಲಿ ಕಬಡ್ಡಿ,ವಾಲಿಬಾಲ್,ಥ್ರೋಬಾಲ್,ಬಾಲ್ ಬ್ಯಾಟ್ಮಿಂಟನ್,ಖೋ ಖೋ ಬಾಲಕರ ಎಲ್ಲಾ ಪಂದ್ಯಾಟಗಳಲ್ಲೂ ಪ್ರಥಮ ಸ್ಥಾನವನ್ನೂ,4×100 ರಿಲೇ- ಪ್ರಥಮ,ಬಾಲಕರ ವಯಕ್ತಿಕ ವಿಭಾಗದಲ್ಲಿ- ಹ್ಯಾಮರ್ ಥ್ರೋ -ಸುರೇಶ ಪ್ರಥಮ ಪ್ರತಾಪ್-ದ್ವಿತೀಯ,ಗುಂಡು ಎಸೆತ-ಲೀಲಾನಂದ ದ್ವಿತೀಯ,ನಿತಿನ್ ತೃತೀಯ,ಎತ್ತರ ಜಿಗಿತ-ನಿತಿನ್ ಪ್ರಥಮ ಜಾಹಿರ್ ತೃತೀಯ,400 ಮೀ ಓಟ-ಲೀಲಾನಂದ ಪ್ರಥಮ,ಜಾಹಿರ್ ದ್ವಿತೀಯ,ಚಕ್ರ ಎಸೆತ-ಲೀಲಾನಂದ ಪ್ರಥಮ,ದಿಗಂತ್ ತೃತೀಯ,1500 ಮೀ-ದಿಗಂತ್ ದ್ವಿತೀಯ,ಧನುಷ್ ತೃತೀಯ,ಉದ್ದ ಜಿಗಿತ-ಮನೋಜ್ ಪ್ರಥಮ,ಪ್ರೇಮ್ ಕುಮಾರ್ ತೃತೀಯ,800 ಮೀ-ಪ್ರೇಮ್ ಕುಮಾರ್ ಪ್ರಥಮ ಹರೀಶ್-ದ್ವಿತೀಯ,3000 ಮೀ-ಪ್ರೇಮ್ ಕುಮಾರ್ ಪ್ರಥಮ, ಹರೀಶ ತೃತೀಯ,ಜಾವೆಲಿನ್ ಎಸೆತ-ಜಾಹಿರ್ ಪ್ರಥಮ,100ಮೀ-ರಜಿತ್ ದ್ವಿತೀಯ,ಮನೋಜ್ ತೃತೀಯ,ತ್ರಿವಿದ ಜಿಗಿತ-ದಿಗಂತ್ ಪ್ರಥಮ,ಹರೀಶ್ ದ್ವಿತೀಯ.ಸ್ಥಾನ ಪಡೆದಿರುತ್ತಾರೆ….

ಬಾಲಕಿಯರ ವಿಭಾಗದಲ್ಲಿ-ವಾಲಿಬಾಲ್- ಪ್ರಥಮ,ಖೋ ಖೋ-ಪ್ರಥಮ,ಬಾಲ್ ಬ್ಯಾಡ್ಮಿಂಟನ್-ಪ್ರಥಮ,ಥ್ರೋಬಾಲ್-ದ್ವಿತೀಯ,ಕಬಡ್ಡಿ-ದ್ವಿತೀಯ,4×100 ರಿಲೇ-ಪ್ರಥಮ. ಬಾಲಕಿಯರ ವಯಕ್ತಿಕ ವಿಭಾಗದಲ್ಲಿ:-ಎತ್ತರ ಜಿಗಿತ-ಆಶಾ ಪ್ರಥಮ,400ಮೀ ಓಟ-ಆಶಾ ಪ್ರಥಮ,200 ಮೀ-ಆಶಾ ಪ್ರಥಮ,ವರಲಕ್ಷ್ಮಿ ದ್ವಿತೀಯ,100ಮೀ-ವರಲಕ್ಷ್ಮೀ ಪ್ರಥಮ,ಪ್ರೀತಿ ದ್ವಿತೀಯ,ಉದ್ದ ಜಿಗಿತ-ಶಬನಮ್ ಪ್ರಥಮ,ಬಬಿತ ದ್ವಿತೀಯ, ಬರ್ಜಿ ಎಸೆತ-ಸ್ನೇಹಾ ದ್ವಿತೀಯ,ಚಕ್ರ ಎಸೆತ-ಹರ್ಷಿತ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಎಮ್.ಪಿ.ಶಿವಕುಮಾರ್ ವರಧಿ ನೀಡಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ದೈಹಿಕ ಶಿಕ್ಷಕರಾದ ಹೆಚ್.ಪಿ.ವೆಂಕಟೇಶ್ ರವರನ್ನು ಮಲ್ನಾಡ್ ಪ್ರೌಢಶಾಲಾ ಸಂಘದ ಅಧ್ಯಕ್ಷರಾದ ಶ್ರೀ ಎಸ್.ವಿ.ರುದ್ರಪ್ಪರವರು,ಉಪಾದ್ಯಕ್ಷರಾದ ಶ್ರೀ ಎನ್.ಕೆ.ಶ್ಯಾಮರಾವ್ ರವರು,ಕಾರ್ಯದರ್ಶಿಗಳಾದ ಶ್ರೀ ಕೆ.ಎ.ಕೊಟ್ಟೂರಪ್ಪರವರು,ಸಂಘದ ನಿರ್ದೇಶಕರುಗಳು,ಸದಸ್ಯರುಗಳು,ಪೋಷಕರುಗಳು,ಮತ್ತು ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರುಗಳು ಅಭಿನಂದನೆ ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here